Slide
Slide
Slide
previous arrow
next arrow

ಅರಣ್ಯ ಇಲಾಖೆಯಿಂದ ದೌರ್ಜನ್ಯ ಮುಂದುವರಿಕೆ: ರವೀಂದ್ರ ನಾಯ್ಕ ಖಂಡನೆ

300x250 AD

ಹೊನ್ನಾವರ: ತಾಲೂಕಾದ್ಯಂತ ಅಲ್ಲಲ್ಲಿ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿಂದ ಕಿರುಕುಳ, ದೌರ್ಜನ್ಯ ಜರುಗುತ್ತಿರುವ ಘಟನೆಗಳನ್ನು ಅರಣ್ಯವಾಸಿಗಳು ದಾಖಲೆ ಸಹಿತ ಹೋರಾಟಗಾರರ ವೇದಿಕೆಗೆ ಮಾಹಿತಿ ನೀಡಿದ್ದು, ಇಂತಹ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯಗಳಿಗೆ ಹೋರಾಟಗಾರರ ವೇದಿಕೆಯು ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿ, ಅರ್ಜಿ ವಿಚಾರಣೆ ಇರುವಂತಹ ಸಂದರ್ಭದಲ್ಲಿ ಅರಣ್ಯವಾಸಿಗಳಿಗೆ ನೋಟಿಸ್ ನೀಡದೇ, ದಾಖಲೆ ಪರಿಶಿಲಿಸದೇ, ಅವಕಾಶಗಳನ್ನ ನೀಡದೇ, ಏಕಾಏಕಿಯಾಗಿ ಅರಣ್ಯವಾಸಿಗಳ ಅತಿಕ್ರಮಣ ಕ್ಷೇತ್ರದಲ್ಲಿ ಅರಣ್ಯವಾಸಿಗಳು ಬೆಳೆಸಿರುವಂತಹ ಗಿಡ ಮರಗಳನ್ನ ಕಡಿದು ದ್ವಂಸಗೊಳಿಸುತ್ತಿರುವ ಅರಣ್ಯ ಸಿಬ್ಬಂದಿಗಳ ಮನೋಪ್ರವೃತ್ತಿ ಖಂಡನಾರ್ಹ ಎಂದು ಅವರು ಹೇಳಿದ್ದಾರೆ.

ಅಸಮರ್ಪಕ ಜಿಪಿಎಸ್ ಮಾನದಂಡದಡಿಯಲ್ಲಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಗಡಿಯನ್ನು ಅರಣ್ಯ ಸಿಬ್ಬಂದಿಗಳು ಗುರುತಿಸುತ್ತಿರುವುದು ಹಾಗೂ ಒಕ್ಕಲೆಬ್ಬಿಸುತ್ತಿರುವುದು ಅರಣ್ಯ ಹಕ್ಕು ಕಾಯಿದೆಗೆ ವ್ಯತಿರಿಕ್ತವಾಗಿರುತ್ತದೆ ಎಂದು ಅವರು ಹೇಳಿದರು.

300x250 AD

 ಹೊನ್ನಾವರ ತಾಲೂಕಿನ ಚಿಕ್ಕನಗೋಡ ಗ್ರಾಮ ಪಂಚಾಯಿತಿಯ ಈಶ್ವರ ಗೌಡ ಹಾಗೂ ಮಾಗೋಡ ಗ್ರಾಮ ಪಂಚಾಯಿತಿಯ ರಾಮ ಪಕ್ಯ ಮರಾಠಿ, ಮತ್ತು ಮಂಜುನಾಥ ನಾಯ್ಕ ಮುಂತಾದ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದ್ದವರಿ ಒಂದು, ಇಲ್ಲದಿದ್ದವರಿಗೆ ಒಂದು:
 ಆರ್ಥಿಕವಾಗಿ ಬಲಿಷ್ಟವಾಗಿರುವಂತಹ ಅರಣ್ಯವಾಸಿಗಳಿಗೆ ವಿಶೇಷ ಸೌಲಭ್ಯಗಳು ನೀಡುವ ಅರಣ್ಯ ಸಿಬ್ಬಂದಿಗಳು, ಬಡ ಅನಕ್ಷರಸ್ಥ ಅರಣ್ಯವಾಸಿಗಳಿಗೆ ವಿನಾ ಕಾರಣ ಕಾನೂನು ಬಾಹಿರವಾಗಿ ಕಿರುಕುಳ ಜರುಗಿಸುತ್ತಿರುವುದು ಖಂಡನಾರ್ಹ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಸಿಬ್ಬಂದಿಗಳ ಕ್ರಮವನ್ನ ಟೀಕಿಸಿದ್ದಾರೆ.

Share This
300x250 AD
300x250 AD
300x250 AD
Back to top